‘ಭಾನುವಾರ ನಗರದ ರೈಲು ನಿಲ್ದಾಣದಿಂದ ಬೆಂಗಳೂರು ಪ್ಯಾಸೆಂಜರ್ ರೈಲು (56910) ಹೊರಡುತ್ತಿತ್ತು. ಈ ವೇಳೆ ಗೌರವ್ (55) ಎಂಬ ಪ್ರಯಾಣಿಕರೊಬ್ಬರು ಲಗೇಜ್ನೊಂದಿಗೆ ರೈಲು ಏರಲು ಪ್ರಯತ್ನಿಸಿ, ಆಯಾ ತಪ್ಪಿ ಬಿದ್ದಿದ್ದಾರೆ. ಅವರ ಕಾಲುಗಳೆರಡು ರೈಲಿನಲ್ಲಿದ್ದರೆ, ಮಿಕ್ಕುಳಿದ ದೇಹ ಹೊರಗೆ ನೇತಾಡುತ್ತ ರೈಲಿನ ಅಡಿಯಲ್ಲಿ ಹೋಗುತ್ತಿತ್ತು. ಅದನ್ನು ಗಮನಿಸಿದ ಹರೀಶ್ ತಕ್ಷಣವೇ ಓಡಿ ಹೋಗಿ ಅವರನ್ನು ರಕ್ಷಿಸಿದ್ದಾರೆ’ ಎಂದು ನಿಲ್ದಾಣದ ಅಧಿಕಾರಿ ಉಮರ್ ಬಾನಿ ತಿಳಿಸಿದ್ದಾರೆ.