ನಗರದ ಮಲ್ಲಿಗೆ ಹೋಟೆಲ್ ಬಳಿ 2018ರ ನ. 14ರಂದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಗೌಸ್ ಎಂಬುವರು ಮೃತಪಟ್ಟಿದ್ದರು. ಅವರ ತಂದೆ ಮಾಬು ಸಾಬ್ ಹಾಗೂ 2019ರ ಡಿ. 25ರಂದು ಹರಪನಹಳ್ಳಿ ಬಸ್ ನಿಲ್ದಾಣದ ಹೊರಗೆ ನಡೆದ ಅಪಘಾತದಲ್ಲಿ ಪಾದಚಾರಿ ಸಿದ್ದೇಶ್ ಎನ್ನುವವರು ಸಾವನ್ನಪ್ಪಿದ್ದರು. ಅವರ ತಂದೆ ಕೆ.ಎಂ. ಕೊಟ್ರಯ್ಯ ಅವರಿಗೆ ₹35,000 ಪರಿಹಾರದ ಚೆಕ್ ಅನ್ನು ಶೀನಯ್ಯ ವಿತರಿಸಿದರು.