ಕೇಂದ್ರ ಸರ್ಕಾರವು ಟಿ.ಎಸ್.ಪಿ ಮುಚ್ಚಿದ ನಂತರ, 2017ರಲ್ಲಿ ಅದಕ್ಕೆ ಸೇರಿದ 82.37 ಎಕರೆ ಜಾಗವನ್ನು ₹55.22 ಕೋಟಿಗೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಪರಭಾರೆ ಮಾಡಿತ್ತು. ಅಲ್ಲಿ ಮಂಡಳಿಯು ಲೇಔಟ್ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲು ತೀರ್ಮಾನಿಸಿತ್ತು. 974 ಜನ ನಿವೇಶನಕ್ಕಾಗಿ ಮುಂಗಡವಾಗಿ ಠೇವಣಿ ಭರಿಸಿ, ಅರ್ಜಿ ಸಲ್ಲಿಸಿದ್ದರು.