ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರ ದರ್ಶನ ಪಡೆಯಲು ಅವರು ಬಂದಿದ್ದರು. ಆದರೆ, ಈ ವೇಳೆ ಸ್ವಾಮೀಜಿ ಅವರು ಮಠದಲ್ಲಿ ಇರಲಿಲ್ಲ. ಆಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ ಅವರು ಉಗ್ರಪ್ಪನವರನ್ನು ಸನ್ಮಾನಿಸಿದರು. ನಂತರ ಉಗ್ರಪ್ಪ ಮಾತನಾಡಿ, ‘ಶ್ರೀರಾಮುಲು ಅವರು ಸಂಸದರಾಗಿ, ಶಾಸಕರಾಗಿ ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ನಾನು ಗೆಲ್ಲುವುದು ಶತಃಸಿದ್ಧ’ ಎಂದರು. ನಂತರ ಮಠದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಶಾಸಕ ಆನಂದ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಮುಖಂಡರ ದಂಡೇ ಅಲ್ಲಿ ಇತ್ತು.