ನಾಗಮಂಗಲ: ಮನುಷ್ಯನಲ್ಲಿರುವ ಒತ್ತಡ ಹಾಗೂ ಉದ್ವೇಗವನ್ನು ದೂರ ಮಾಡಿ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಲು, ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಲು ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ‘ಜ್ಞಾನಾಮೃತ ಭವನ’ ನಿರ್ಮಿಸಲಾಗಿದ್ದು, 27ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಜಯಲಕ್ಷ್ಮಿ ತಿಳಿಸಿದರು.