ಕೆಳ ಮಹಡಿಯ ಕೊಠಡಿಯನ್ನು ಸಣ್ಣ ಸಭೆಗಳಿಗೆ ಉಪಯೋಗಿಸಲಾಗುತ್ತಿತ್ತು. ಅಲ್ಲಿ ಮುಖ್ಯಸ್ಥರು ಕೂರುವ ಆಸನಗಳು ದಕ್ಷಿಣಾಭಿಮುಖವಾಗಿ ಮತ್ತು ಕೈ ತೊಳೆಯುವ ನೀರಿನ ತೊಟ್ಟಿಯನ್ನು ಆಗ್ನೇಯ ದಿಕ್ಕಿನಲ್ಲಿ ಅಳವಡಿಸಲಾಗಿತ್ತು. ವಾಸ್ತು ಪ್ರಕಾರ ಅವು ಸರಿಯಾದ ದಿಕ್ಕಿನಲ್ಲಿ ಇಲ್ಲ ಎಂದು ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ಒಡೆದು ಮಾರ್ಪಾಡುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.