ಸುಧೆ, ಜೇನು, ದೀಪ, ಅಮೃತ, ಸಮಾನ ಜ್ಞಾನ ಇದರಲ್ಲಿ ಹರಳು ಹುಡುಕುವುದು ಸಲ್ಲದು. ‘ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು, ಕೆಳಗಿಳಿದು, ನೆಲಕೆ ಹಸಿರು ಮೂಡಿತು ಹೇಗೆ? ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಈ ಕವಿತೆಯ ಮೂಲಕ ಪ್ರೀತಿಯನ್ನು ವ್ಯಾಖ್ಯಾನಿಸಿದ್ದಾರೆ. ಪ್ರೀತಿ, ಪ್ರೇಮ ಬರೀ ಯುವ ಮನಸ್ಸುಗಳ ಆಕರ್ಷಣೆಯಲ್ಲಿ ಹುಟ್ಟುವಂಥದಲ್ಲ. ತಾಯಿ-ಮಗುವಿನ ನಡುವೆ ಹುಟ್ಟುವಂಥದ್ದು, ಗುರು ಶಿಷ್ಯರ ನಡುವೆ ಮೂಡುವಂಥದ್ದು ಪ್ರೀತಿಯಾಗಿರುತ್ತದೆ. ಪ್ರೀತಿ, ವಿಶ್ವಾಸ ಗಟ್ಟಿಯಾಗಿ ನೆಲೆಯೂರಿದ ಜಾಗದಲ್ಲಿ ಆನಂದ ತುಂಬಿರುತ್ತದೆ. ಪರಸ್ಪರರಲ್ಲಿ ಅಂದ ಗುಣ, ಲಿಂಗ ಗುಣ, ಅನುಪಮ ಸ್ನೇಹ ಮೂಡಿದಾಗ ಲೋಕದ ಭ್ರಾಂತಿ ಮರೆಯಾಗುತ್ತದೆ.