ಪಟ್ಟಣದ ಶ್ರೀ ಕೃಷ್ಣದೇವರಾಯ ಮತ್ತು ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ತೆರಳಿದ ಸಮಿತಿಯ ಪದಾಧಿಕಾರಿಗಳು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಜಯಘೋಷ ಹಾಕಿದರು. ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ, ಈರಣ್ಣ ಪೂಜಾರಿ, ಚಿತ್ರದುರ್ಗದ ರಾಜ ಪರಶುರಾಮ ನಾಯಕ, ಪ್ರಸನ್ನ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಸದಸ್ಯರಾದ ಲಿಂಗಪ್ಪ, ಹನುಮಂತ, ಅಬ್ದುಲ್ ಜಂತೆ, ಭಾನು ಪ್ರಕಾಶ್, ಹುಲುಗಪ್ಪ ಇದ್ದರು.