ರೈತ ದೇಶದ ಬೆನ್ನೆಲುಬು ಎನ್ನುವ ರಾಜಕಾರಣಿಗಳಾಗಲಿ, ಸರ್ಕಾರಕ್ಕಾಗಲಿ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಚುನಾವಣೆ ಸಮಯದಲ್ಲಿ ರೈತರ ಬಗ್ಗೆ ಅನುಕಂಪ ತೋರಿಸಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಸರ್ಕಾರಿ ಅಧಿಕಾರಿಗಳು ವೇದಿಕೆ ಮೇಲೆ ಸರ್ಕಾರದ ದಾಖಲೆಗಳ ಮೇಲೆ ರೈತರ ಪರವಾಗಿದ್ದೇವೆ ಎನ್ನುತ್ತಾರೆ. ಅವರ ಬಳಿ ಹೋದರೆ ಹಣವಿಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಟೀಕಿಸಿದರು.