ಹೊನ್ನಾವರ (ಉತ್ತರ ಕನ್ನಡ): ‘ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಅಣಕು ನಾಟಕ ಪ್ರದರ್ಶನ ಮಾಧ್ಯಮದವರಿಂದ ನಡೆದಿದ್ದು, ಅವರಿಗೆ ಅತೀಂದ್ರಿಯ ಶಕ್ತಿ ಇರುವಂತಿದೆ. ರವಿ, ಕವಿ, ಕಪಿ ಕಾಣದ್ದನ್ನು ಮಾಧ್ಯಮದವರು ಕಾಣುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದರು.ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.