ಸಂಸ್ಕೃತಿ ಪ್ರಕಾಶನವು ಪ್ರಕಟಿಸಿರುವ ಅಪ್ಪಗೆರೆ ವೆಂಕಟಯ್ಯನವರ ಅನುಭವ ಕಥನ ‘ದಣಿವರಿಯದ ಪಯಣ’ ಕೃತಿಯನ್ನು ನಗರದ ರೇಯ್ಸ್ ಹಾಸ್ಪಿಟಲ್ ಸಭಾಂಗಣದಲ್ಲಿ ಭಾನವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಲೇಖಕರು ನಿಸ್ಸಂಕೋಚದಿಂದ, ಮುಲಾಜುಗಳಿಲ್ಲದೆ ಬರೆಯಬೇಕು. ಖುಷ್ವಂತ್ಸಿಂಗ್ ಹಾಗೆ ಪುಸ್ತಕಗಳನ್ನು ಬರೆದರು. ಮತ್ತೆ ಮತ್ತೆ ಓದುವಂತೆ, ಓದಿದಷ್ಟೂ ಮುಗಿಯದಂತೆ ಡಾ.ಅಂಬೇಡ್ಕರ್ ಅಗಾಧವಾಗಿ ಬರೆದರು’ ಎಂದು ಹೇಳಿದರು.