‘ಕಮಲಾಪುರದ ನಿವಾಸಿ ಅಬ್ರಾಹಂ ಎಂಬುವರಿಂದ ದುಡ್ಡು ವಸೂಲಿ ಮಾಡಲು ಅವರ ಮನೆಗೆ ವಿನೋದ್ ಬುಧವಾರ ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಸಿಟ್ಟಿನಿಂದ ವಿನೋದ್ ತನ್ನ ಕೈಯಲ್ಲಿದ್ದ ಯೇಸುವಿನ ಮೂರ್ತಿಯನ್ನು ಭಗ್ನಗೊಳಿಸಿದ್ದ. ಚರ್ಚ್ನಲ್ಲಿದ್ದ ಯೇಸುವಿನ ಮೂರ್ತಿ ಕೂಡ ಇದೇ ರೀತಿ ಭಗ್ನಗೊಂಡಿತ್ತು. ಅದನ್ನು ಗಮನಿಸಿದ ಅಂಥೋನಿ, ಅದರಲ್ಲಿ ವಿನೋದ್ ಕೈವಾಡ ಇದೆ ಎಂದು ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.