ಹೊಸಪೇಟೆ: ‘ಮೋದಿಮತ್ತೊಮ್ಮೆ’ ಶೀರ್ಷಿಕೆ ಅಡಿ ಬಿಜೆಪಿ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರಚಾರ ಕೈಗೊಂಡರು.
ನಗರದ ವಡಕರಾಯ ದೇವಸ್ಥಾನದಿಂದ ಆರಂಭಗೊಂಡ ಪ್ರಚಾರವು ಮೇನ್ ಬಜಾರ್, ರೋಟರಿ ವೃತ್ತ, ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲಿ ನಡೆಯಿತು. ಇದೇ ವೇಳೆ ವ್ಯಾಪಾರಸ್ಥರಿಂದ ಪಕ್ಷಕ್ಕೆ ದೇಣಿಗೆ ಕೂಡ ಸಂಗ್ರಹಿಸಿದರು.
ಮಂಡಲದ ಅಧ್ಯಕ್ಷ ಅನಂತ ಪದ್ಮನಾಭ ಮಾತನಾಡಿ, ‘ಐದು ವರ್ಷಗಳಲ್ಲಿ ಮೋದಿಯವರು ಉತ್ತಮ ಕೆಲಸ ಮಾಡಿದ್ದಾರೆ. ಪುನಃ ಅವರು ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗುವುದು ಖಚಿತ’ ಎಂದು ಹೇಳಿದರು.
ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗುದ್ಲಿ ಪರಶುರಾಮ, ಮುಖಂಡರಾದ ಬಸವರಾಜ ನಾಲತ್ವಾಡ, ಕೆ.ಮಧುಸೂದನ್, ಸುಬ್ರಹ್ಮಣ್ಯ, ರಾಘವೇಂದ್ರ, ಸತ್ಯನಾರಾಯಣಗುಂಡಿ ರಾಘವೇಂದ್ರ, ಅನವಾಳ ದೇವರಾಜ ಇದ್ದರು.