ದೂರಿನಲ್ಲಿ ಏನಿದೆ?: ‘ಇದೇ 14ರಂದು ಮನೆಗೆ ಬಂದ ಪೊಲೀಸರು, ‘ನಿಮ್ಮ ಮಗನಿಗೆ ಯಾರೊ ಹೊಡೆದು ಕುರುಬರಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗನ ತಲೆ ಮತ್ತು ತೊಡೆಯ ಭಾಗಕ್ಕೆ ಬ್ಯಾಂಡೇಜ್ ಹಾಕಲಾಗಿತ್ತು. ಈ ಬಗ್ಗೆ ಮಗನನ್ನು ವಿಚಾರಿಸಿದಾಗ, ಶಾಲೆಯಿಂದ ಮರಳುತ್ತಿದ್ದಾಗ ಮೂರು ಬೈಕುಗಳಲ್ಲಿ ಬಂದ ಆರು ಹುಡುಗರು ಹಲ್ಲೆ ನಡೆಸಿರುವುದಾಗಿ ಹೇಳಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.