ಅಂದಾಜು 20 ನಿಮಿಷಗಳ ಕಾಲ ನಡೆದ ಕೆಂಡ ತೂರಾಟದ ದೃಶ್ಯ ಕಗ್ಗತ್ತಲಿನಲ್ಲಿ ಕೆಂಡದ ಮಳೆಯಂತೆ ಭಾಸವಾಯಿತು. ಇಷ್ಟಾದರೂ ಯಾರಿಗೂ ಗಾಯಗಳು ಆಗದು ಎಂಬುದು ಅಚ್ಚರಿ ಹಾಗೂ ವಿಶೇಷ. ಕುರಿಹಟ್ಟಿ, ಕರಡಿಹಳ್ಳಿ, ಹುಲಿಕುಂಟೆ, ಭೀಮಸಮುದ್ರ, ಮಡಕಲಕಟ್ಟೆ, ಓಬಳಶೆಟ್ಟಿಹಳ್ಳಿ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.