ಬೆಂಗಳೂರು: ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ (ಐಐಎಂಬಿ) ಐವರು ವಿದ್ಯಾರ್ಥಿಗಳ ತಂಡವು ಸಿಎಫ್ಎ ಸಂಸ್ಥೆಗಳ ಸಂಶೋಧನಾ ಸ್ಪರ್ಧೆಯಲ್ಲಿ (ಹೂಡಿಕೆ ಒಲಿಂಪಿಯಾಡ್ 2013–14) ಪ್ರಶಸ್ತಿ ಗಳಿಸಿದೆ.
ತಂಡದಲ್ಲಿ ಸೌಮ್ಯಾ ಗುಪ್ತ, ಪ್ರತೀಕ್ ಜೈಪುರಿಯಾರ್, ಸಾಕ್ಷಿ ಮಹಾಜನ್, ಸಿದ್ಧಾರ್ಥ ಅಗರವಾಲ್, ಅಭಿಷೇಕ್ ಅಗರವಾಲ್ ಇದ್ದರು. ಸಿಂಗಪುರದಲ್ಲಿ ಏಪ್ರಿಲ್ನಲ್ಲಿ ನಡೆಯಲಿರುವ ಏಷ್ಯಾ– ಫೆಸಿಫಿಕ್ ಮಟ್ಟದ ಫೈನಲ್ ಸ್ಪರ್ಧೆಯಲ್ಲಿ ಈ ತಂಡ ಪಾಲ್ಗೊಳ್ಳಲಿದೆ.
ಈ ಸ್ಪರ್ಧೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಹೂಡಿಕೆ ಸಂಶೋಧನೆ, ಮೌಲ್ಯಮಾಪನ, ಹೂಡಿಕೆ ವರದಿ ತಯಾರಿಕೆ ಮತ್ತಿತರ ವಿಷಯಗಳಲ್ಲಿ ವಿದ್ಯಾರ್ಥಿಗಳ ಕೌಶಲದ ಪರೀಕ್ಷೆ ನಡೆಸಲಾಗುತ್ತದೆ.
ಐಐಎಂಬಿ ತಂಡವು ಆರಂಭದಲ್ಲಿ ದಕ್ಷಿಣ ವಲಯದ ಪ್ರಶಸ್ತಿ ಗಳಿಸಿತ್ತು. ಐಎಂಬಿ ಅಹಮದಾಬಾದ್, ಐಎಸ್ಬಿ ಸೇರಿದಂತೆ ದೇಶದ ವಿವಿಧ ಆಡಳಿತ ನಿರ್ವಹಣಾ ಸಂಸ್ಥೆಗಳು ಫೈನಲ್ನಲ್ಲಿ ಭಾಗವಹಿಸಿದ್ದವು. ಐಐಎಂಬಿ ಪ್ರಾಧ್ಯಾಪಕ ಪ್ರೊ.ಪಿ.ಸಿ.ನಾರಾಯಣ್ ಅವರು ತಂಡಕ್ಕೆ ಸಲಹೆಗಾರರು ಆಗಿದ್ದರು.