ಬೆಂಗಳೂರು: ನಿತಿನ್ ತಿಮ್ಮಯ್ಯ ಅವರ ಎರಡು ಗೋಲುಗಳ ನೆರವಿನಿಂದ ಎ.ಜಿ ಕರ್ನಾಟಕ ತಂಡ ಇಲ್ಲಿ ನಡೆದ ದಕ್ಷಿಣ ವಲಯ ಹಾಕಿ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಚಾಂಪಿಯನ್ ಆಗಿದೆ.
ಫೈನಲ್ನಲ್ಲಿ ಎ.ಜಿ ಕರ್ನಾಟಕ ತಂಡ 3–2 ಗೋಲುಗಳಲ್ಲಿ ಎ.ಜಿ ಆಂಧ್ರಪ್ರದೇಶ, ಹೈದರಾಬಾದ್ ತಂಡವನ್ನು ಮಣಿಸಿದೆ.
ಕರ್ನಾಟಕ ತಂಡದ ಪರ ನಿತಿನ್ ತಿಮ್ಮಯ್ಯ (10, 57ನೇ ನಿ.) ಎರಡು ಗೋಲು ತಂದಿತ್ತರು. ಅಪ್ಪಚು (26ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಆಂಧ್ರಪ್ರದೇಶ ತಂಡದ ಇರ್ಫಾನ್ (20, 31ನೇ ನಿ.) ಎರಡು ಗೋಲು ದಾಖಲಿಸಿದರು.