‘ಮುಗಳಖೋಡ ಮಠ ಕೂಡ ಜಾತಿ ಭೇದವನ್ನು ತೊಡೆದುಹಾಕುವ ಪರಂಪರೆಯಲ್ಲಿ ಸಾಗಿಬಂದಿದೆ. ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ನೆರವು ನೀಡುವಾಗ, ಬಡವರಿಗೆ ಉಚಿತ ಔಷಧ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸುವಾಗ, ಅನ್ನದಾನ ಮಾಡುವಾಗ ಜಾತಿ ನೋಡಿಲ್ಲ. ‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ತತ್ವದಡಿ ಕೆಲಸ ಮಾಡಿದೆ’ ಎಂದು ಪ್ರಶಂಸಿಸಿದರು.