‘ಕಾರ್ಯಕ್ರಮ ನಡೆಯಬೇಕಿದ್ದ ಅರಮನೆ ಮೈದಾನವನ್ನು ಬೇರೆಯವರು ಕಾಯ್ದಿರಿಸಿದ್ದಾರೆ. ಅನುಮತಿ ನೀಡುವ ಅಧಿಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಇದೆ. ಸರ್ಕಾರದ ಮೇಲೆ ಒತ್ತಡ ಹಾಕಿ, ಬಿಜೆಪಿಗೆ ನೀಡುವಂತೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಅದೇ ಪಕ್ಷದ ಮತ್ತೊಂದು ಮೂಲ ತಿಳಿಸಿದೆ.