ಬೆಂಗಳೂರು: ಹಳೆ ಮದ್ರಾಸ್ ರಸ್ತೆಯಲ್ಲಿರುವ ಬಿ.ಎಂ.ಕೃಷ್ಣಮೂರ್ತಿನಗರದಲ್ಲಿ ಭಾನುವಾರ ಅಯ್ಯಪ್ಪಸ್ವಾಮಿಗೆ ವಿಶೇಷ ಮಕರ ಜ್ಯೋತಿ ಪೂಜೆ ನೆರವೇರಿಸಲಾಯಿತು.
ದೇವರಿಗೆ ವಿಶೇಷ ಅಲಂಕಾರ ಮಾಡಲು ಭಕ್ತರು ಆಭರಣಗಳನ್ನು ತಲೆ ಮೇಲೆ ಹೊತ್ತು ಭಜನೆ ಮಾಡುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಬಳಿಕ ಆ ಆಭರಣಗಳಿಂದ ದೇವರಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
‘ಏಳು ದಿನಗಳಿಂದ ಮಹಾಗಣಪತಿ ಹೋಮ, ತುಪ್ಪದ ಅಭಿಷೇಕ, ವೈಕುಂಠ ಏಕಾದಶಿ ವಿಶೇಷ ಪೂಜೆ, ದೀಪ ಪೂಜೆ ಸೇರಿದಂತೆ ಹಲವು ಪೂಜಾ ಕಾರ್ಯಗಳನ್ನು ನಡೆಸಲಾಗಿದೆ’ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಕೆ. ಮನಮೋಹನ್ ತಿಳಿಸಿದರು.