‘ನಾವು ಇಂದು ವಿದ್ಯಾವಂತರಾಗುತ್ತಿದ್ದೇವೆ, ಆದರೆ ವಿನಯವಂತರಾಗುತ್ತಿಲ್ಲ. ಕೇವಲ ಹಣ, ಉದ್ಯೋಗಕ್ಕಾಗಿ ವಿದ್ಯೆ ಪಡೆಯುತ್ತಿದ್ದೇವೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯು ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯ ಕಲಿಸಬೇಕು. ಮನುಷ್ಯರಾಗಿ ಹುಟ್ಟಿದರಷ್ಟೇ ಸಾಲದು, ಮನುಷ್ಯರಾಗಿ ಬಾಳುವುದನ್ನು ಕಲಿಯಬೇಕು. ದೊಡ್ಡವರು ಮಕ್ಕಳಿಗೆ ಸುಂದರ
ಪರಿಸರ ನಿರ್ಮಿಸಿಕೊಡಬೇಕು. ಕೋಮುಗಲಭೆ, ಭ್ರಷ್ಟಾಚಾರ ಆಡಳಿತದಿಂದ ದೇಶ ನಲುಗುತ್ತಿದೆ. ಭ್ರಷ್ಟಾಚಾರ ರಹಿತ ರಾಜ್ಯ ಸ್ಥಾಪಿಸಲು ಎಲ್ಲರೂ ಪಣ ತೊಡಬೇಕು’ ಎಂದು ಹೇಳಿದರು.