ಮದ್ದೂರಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಅವರು ಮಾತನಾಡಿದರು. ‘2014ರಲ್ಲಿ ಇಡೀ ದೇಶ ಒಂದು ದೊಡ್ಡ ಪರಿವರ್ತನೆಯತ್ತ ಹೆಜ್ಜೆ ಹಾಕಿತು. ಆ ಬದಲಾವಣೆಗೆ ನರೇಂದ್ರ ಮೋದಿ ಕಾರಣೀಭೂತರಾದರು. ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಕಾಂಗ್ರೆಸ್ ಸರ್ಕಾರದ ಹಗರಣ, ಭ್ರಷ್ಟಾಚಾರದಿಂದ ಮುಕ್ತಿಗಾಗಿ ಜನರೇ ನರೇಂದ್ರ ಮೋದಿ ಅವರನ್ನು ಸೃಷ್ಟಿಸಿದರು. ಮೂರು ವರ್ಷಗಳಿಂದ ದೇಶ ಆರ್ಥಿಕ ಅಪರಾಧಗಳಿಂದ ಮುಕ್ತವಾಗಿದೆ. ವಿಶ್ವ ಸಮುದಾಯದಲ್ಲಿ ಪ್ರಧಾನಮಂತ್ರಿಗೆ ಸಿಕ್ಕಿರುವ ಅಗ್ರಮಾನ್ಯತೆಗೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕು’ ಎಂದು ಹೇಳಿದರು.