ಅನಾರೋಗ್ಯದ ಕಾರಣ ಇಲ್ಲಿನ ಇಂದಿರಾನಗರ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ ಪತ್ನಿ , ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 20 ವರ್ಷಗಳ ಕಾಲ ಅವರು ಬಿಎಸ್ಎನ್ಎಲ್ ತಂಡಕ್ಕಾಗಿ ಆಡಿದ್ದಾರೆ. 1987 ಮತ್ತು 1990ರ ಅವಧಿಯಲ್ಲಿ ನಡೆದ ಸಂತೋಷ್ ಟ್ರೋಫಿ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.