ಪರಮಾನಂದ, ಬೀದಿ ಬದಿಯ ಎಗ್ ರೈಸ್ ಅಂಗಡಿ ಇಟ್ಡುಕೊಂಡಿದ್ದ. ಭಾನುವಾರ ಮಧ್ಯರಾತ್ರಿ ಅಂಗಡಿಗೆ ಬಂದ ಮೂವರಿಂದ ಆರಂಭಗೊಂಡ ಜಗಳ ಅತಿರೇಕಕ್ಕೆ ತಿರುಗಿ ಪರಮಾನಂದನ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.