ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಛಾಯಾಗ್ರಹಣ ಸ್ಪರ್ಧೆ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊನ್ನಾವರದ ಬಳಿಯ ಗುಣವಂತೆಯ ‘ಯಕ್ಷಾಂಗಣ’ ದಲ್ಲಿ ಇದೇ 27ರಿಂದ 31ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವ–9 ನಡೆಯಲಿದ್ದು, ಇದರ ಅಂಗವಾಗಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ಸಹಯೋಗದಲ್ಲಿ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಲಾಗಿದೆ.

ಮಾಹಿತಿಗೆ 70195–71236 ಸಂಪರ್ಕಿಸಬಹುದು. ಕಳೆದ ಸಾಲಿನ ಸ್ಪರ್ಧೆಯಲ್ಲಿ ಸಾಗರದ ಎಸ್. ಅಮರದೀಪ ಮತ್ತು ಹೊನ್ನಾವರದ ರಾಮಕೃಷ್ಣ ಹೆಗಡೆಗೆ ಕ್ರಮವಾಗಿ ಪ್ರಥಮ ದ್ವಿತೀಯ ಬಹುಮಾನ ದೊರೆತಿದೆ.

ಗೌರವ ಪುರಸ್ಕಾರಕ್ಕೆ ರಾಜಾರಾಮ್ ಹೆಗಡೆ ಶಿರ್ಸಿ, ಸುಹಾಸ್ ಮುತ್ಮುರ್ಡು, ಸಾಗರದ ಕೆ. ಚಂದ್ರಶೇಖರ ಸಾಗರ, ವಿ.ಡಿ. ಭಟ್ ಸುಗಾವಿ, ಶಶಿಧರ್ ಗುಣವಂತೆ, ಕಮಲಾಕರ ಹೆಗಡೆ ಹಾವೇರಿ, ಬೆಂಗಳೂರಿನ ಸುದರ್ಶನ ಕೆ. ಹೆಗಡೆ ಆಯ್ಕೆಯಾಗಿದ್ದಾರೆ. ತಲಾ₹12,000 ಬಹುಮಾನವನ್ನು ಈ ಪ್ರಶಸ್ತಿ ಒಳಗೊಂಡಿವೆ. ಇದೇ 31ರಂದು ಬಹುಮಾನ ವಿತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT