ವಂಚನೆ ಜಾಲದ ಬಗ್ಗೆ ಸುದ್ದಿಗಾ ರರ ಜೊತೆ ಮಾತನಾಡಿದ ಸಿಸಿಬಿ ಡಿಸಿಪಿ ಶರಣಪ್ಪ, ‘ಏರ್ಟೆಲ್ ಹಾಗೂ ಇತರೆ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲಿ ವಂಚಕರು ಕರೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಕರೆಗಳ ಬಗ್ಗೆ ಜನರು ಜಾಗೃತಿ ವಹಿಸಬೇಕು. ನೆಟ್ವರ್ಕ್ ಬದಲಾವಣೆಗಾಗಿ ಮಾಹಿತಿ ಕೋರಿ ಯಾರಾದರೂ ಕರೆ ಮಾಡಿದರೆ, ಪೊಲೀಸ್ ನಿಯಂತ್ರಣ ಕೊಠಡಿ–112ಕ್ಕೆ ಕರೆ ಮಾಡಿ’ ಎಂದರು.