ಈ ವೇಳೆ ಮಾತನಾಡಿದ ಜನಾರ್ದನ್, ಮೇ 4ರಿಂದ ಇಡೀ ರಾಜ್ಯದಲ್ಲಿ ಕೈಗಾರಿಕೆ, ಸೇವೆ, ವ್ಯಾಪಾರ ಚಟುವಟಿಕೆಗಳನ್ನು ಪ್ರಾರಂಭಿಸಲು ಒತ್ತಾಯಿಸಿದ್ದಾರೆ. ಲಾಕ್ಡೌನ್ ಸಡಿಲಿಕೆ, ಸರ್ಕಾರದ ಪಾತ್ರ, ವಿದ್ಯುತ್, ಕಾರ್ಮಿಕರು, ಆಸ್ತಿ ತೆರಿಗೆ, ಕೋವಿಡ್ ಅಸಿಸ್ಟೆನ್ಸ್ ಫಂಡ್ ಸ್ಥಾಪನೆ. ಕೈಗಾರಿಕಾ ನೀತಿಯಲ್ಲಿ ಕೋವಿಡ್ ಪರಿಹಾರ ಸೇರಿದಂತೆ ಹಲವಾರು ವಿಷಯಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿದರು. ಇದೇ ರೀತಿ ಇತರೆ ಸಂಘಗಳು ಸಹ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.