ಪಕ್ಷಿಗಳ ರಕ್ಷಣಾ ತಂಡದಲ್ಲಿ ಕೆಲಸ ಮಾಡುವ ಶಾಲಾ ಶಿಕ್ಷಕ ದೀಪಕ್, ‘ತಾವರೆಕೆರೆ, ವಿಲ್ಸನ್ ಗಾರ್ಡನ್, ಸರ್ಜಾಪುರ ಮತ್ತು ಸುತ್ತ–ಮುತ್ತಲಿನ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕಾಗೆ ಮತ್ತು ಪಾರಿವಾಳಗಳು ಸತ್ತು ಬಿದ್ದಿದ್ದನ್ನು ಕಂಡಿದ್ದೇನೆ. ಆದರೆ, ಇದಕ್ಕೆ ಕೊರೊನಾ ವೈರಸ್ ಕಾರಣ ಎಂಬ ವದಂತಿ ಸರಿಯಲ್ಲ. ವಿಷಾಹಾರ ಸೇವಿಸಿ ಪಕ್ಷಿಗಳು ಸಾವಿಗೀಡಾಗಿರಬಹುದು’ ಎಂದು ಪಕ್ಷಿಪ್ರೇಮಿ ಕುಮಾರ್ ಹೇಳಿದರು.