ತಕ್ಷಣ ಕಾರ್ಯಪ್ರವೃತರಾದ ಅಶ್ವತ್ಥನಾರಾಯಣ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರು. ಕೆಲವು ತಾಸುಗಳ ಬಳಿಕ ಯೂನಿವರ್ಸಲ್ ಸಂಸ್ಥೆಯಿಂದ ಆಮ್ಲಜನಕ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವಲ್ಲಿ ಸಫಲರಾದರು.
ಚಾಮರಾಜನಗರದಲ್ಲಿ ನಡೆದ ದುರಂತ ಕಣ್ಣ ಮುಂದಿರುವಾಗಲೇ ಎದುರಾಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸುವಲ್ಲಿ ಡಿಸಿಎಂ ಯಶಸ್ವಿಯಾದರು. ವಿವಿಧ ಮೂಲಗಳಿಂದ ಬೇಕಾದಷ್ಟು ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಸಂಗ್ರಹ ಸೀಮಿತವಾಗಿತ್ತು. ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳು ರೋಗಿಗಳ ಆರೋಗ್ಯವನ್ನು ನೋಡಿಕೊಂಡರು. ಸೂಕ್ತ ಸಮಯಕ್ಕೆ ಆಮ್ಲಜನಕ ಸಿಲಿಂಡರ್ ತಲುಪಿಸಲು ಪೊಲೀಸರು ನೆರವಾದರು ಎಂದು ವಿವರಿಸಿದ್ದಾರೆ.