ಬಿಬಿಎಂಪಿ ಕಿರಿಯ ಎಂಜಿನಿಯರ್ ಲೋಕೇಶ್ ಎಂದು ಹೇಳಿಕೊಂಡ ವ್ಯಕ್ತಿ ₹3 ಲಕ್ಷ ಲಂಚ ಕೊಡದಿದ್ದರೆ ಸಿಂಗಸಂದ್ರದಲ್ಲಿ ಅನುಮತಿ ಪಡೆಯದೆ ಕಟ್ಟಿರುವ ಮನೆಯನ್ನು ಬೀಳಿಸುವುದಾಗಿ ಹೆದರಿಸಿದರು. ಆನಂತರ ದೂರುದಾರರು ಮಧ್ಯವರ್ತಿ ಪುಟ್ಟಣ್ಣ ಮತ್ತು ವಾಟರ್ ಮ್ಯಾನ್ ಗೋವಿಂದರಾಜು ಎಂಬುವವರ ಮೂಲಕ ಮನವೊಲಿಸಿದ ಬಳಿಕ ₹ 1.5 ಲಕ್ಷಕ್ಕೆ ಒಪ್ಪಲಾಯಿತು. ಇತ್ತೀಚೆಗೆ ಲೋಕೇಶ್ ಮತ್ತು ಕೃಷ್ಣಕುಮಾರ್ ಎಂಬುವರು ಪಿರ್ಯಾದಿಯಿಂದ ₹50 ಸಾವಿರ ನಗದು, ₹ 1 ಲಕ್ಷದ ಚೆಕ್ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಖಾಸಗಿ ವ್ಯಕ್ತಿ ಲೋಕೇಶ್ ತಾನು ಬಿಬಿಎಂಪಿ ಎಂಜಿನಿಯರ್ ಎಂದು ನಂಬಿಸುತ್ತಿದ್ದರು ಎಂದು ಎಸಿಬಿ ಮೂಲಗಳು ತಿಳಿಸಿವೆ.