ಬೆಂಗಳೂರು ಉತ್ತರ ತಾಲ್ಲೂಕಿನ ಮೈಹಿಮಣ್ಣನಪಾಳ್ಯದಲ್ಲಿ ತೆರೆದಿರುವ ಹಾಲು ಉತ್ಪಾದಕರ ಸಂಘವನ್ನು ನೋಂದಣಿ ಮಾಡಿಕೊಡಲು ಸುನೀಲ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲಿಗೆ ₹25 ಸಾವಿರ, ನಂತರ ₹10 ಸಾವಿರವನ್ನು ಹಂತ ಹಂತವಾಗಿ ಪಡೆದುಕೊಂಡಿದ್ದು, ಮಂಗಳವಾರ ಬಾಕಿ ₹5 ಸಾವಿರ ಪಡೆಯುತ್ತಿದ್ದಾಗ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.