‘ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಸ್ಥಳದಲ್ಲೇ ಮೂರು ಬಾರಿ ಉರುಳಿಬಿದ್ದಿತ್ತು. ತರಕಾರಿ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಉರುಳಿಬಿದ್ದ ವಾಹನದಲ್ಲಿದ್ದ ಗೋಪಾಲರೆಡ್ಡಿ ಹಾಗೂ ವೆಂಕಟರೆಡ್ಡಿ, ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯರು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ವಿವರಿಸಿದರು.