‘ಜೀಪಿನಲ್ಲಿ ಆರೋಪಿಯ ಸ್ನೇಹಿತರು ಇದ್ದರು. ಮುಖ್ಯರಸ್ತೆಯಲ್ಲೇ ನಿರ್ಲಕ್ಷ್ಯದಿಂದ ಜೀಪು ಚಲಾಯಿಸಿದ್ದರಿಂದ, ನಿಯಂತ್ರಣ ತಪ್ಪಿತ್ತು. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ಜೀಪು, ಫುಟ್ಪಾತ್ ಏರಿತ್ತು. ನಡೆದುಕೊಂಡು ಹೊರಟಿದ್ದ ಶಾಲಾ ವಿದ್ಯಾರ್ಥಿನಿ ಸಾಯಿಸ್ನೇಹ (11) ಸೇರಿ ಮೂವರಿಗೆ ಗುದ್ದಿತ್ತು. ನಂತರ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿತ್ತು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ವಿವರಿಸಿದರು.