‘ಗುರುಪ್ರಿತ್ ಸಿಂಗ್ ಹೆಸರಿನಲ್ಲಿ ಬಾಡಿಗೆ ಕಾರು ಬುಕ್ಕಿಂಗ್ ಮಾಡಿದ್ದೆ. ಹೋಟೆಲ್ನಲ್ಲಿ ಊಟ ಮಾಡಿಕೊಂಡು ನಂದಿಬೆಟ್ಟಕ್ಕೆ ಹೋಗಿ ಬರೋಣವೆಂದು ಹೇಳಿ ಅದೇ ಕಾರಿನಲ್ಲಿ ಪತ್ನಿ ಕರೆದುಕೊಂಡು ಹೊರಟಿದ್ದೆ. ಬಚ್ಚಹಳ್ಳಿ ಗೇಟ್ ಬಳಿ ಪತ್ನಿಯನ್ನು ಕಾರಿನಿಂದ ತಳ್ಳಿದೆ. ನಂತರ, ಆಕೆಯ ತಲೆ ಮೇಲೆ ಕಾರು ಚಲಾಯಿಸಿ ಕೊಲೆ ಮಾಡಿದೆ’ ಎಂಬುದಾಗಿ ಆತ ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ ಹಿರಿಯ ಅಧಿಕಾರಿ ಹೇಳಿದರು.