ಟೇಬಲ್ ಮೇಲೆ ಕುಳಿತು ಚಂದ್ರಶೇಖರ್ ಮದ್ಯ ಕುಡಿಯುತ್ತಿದ್ದರು. ಪಾನಮತ್ತರಾಗಿದ್ದ ಕೆಲ ಯುವಕರು, ಅವರ ಬಳಿ ಬಂದು ಜಗಳ ತೆಗೆದಿದ್ದರು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಅದೇ ವೇಳೆ ದುಷ್ಕರ್ಮಿಯೊಬ್ಬ, ಒಡೆದ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಇರಿದಿದ್ದ. ತೀವ್ರ ರಕ್ತಸ್ರಾವವಾಗಿ ಚಂದ್ರಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದರು.