ಬೆಂಗಳೂರು: ಅಂಗಡಿಯಲ್ಲಿ ಮಾಡಿದ್ದ ಸಾಲ ನೀಡುವಂತೆ ಕೇಳಿದ್ದಕ್ಕೆ ಮಾಲೀಕ ಹಾಗೂ ಅವರ ಪತ್ನಿ, ಪುತ್ರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಆರೋಪಿ ಸಲ್ಮಾನ್ ಟಿಪ್ಪು ಎಂಬಾತನನ್ನು ಕೆಂಗೇರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸಹಚರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.