<p><strong>ಬೆಂಗಳೂರು:</strong> ಡಾ.ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ರಾಜ್ಯ ಸರ್ಕಾರವು ಜಾಗ ನೀಡಿದ್ದಕ್ಕೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ನಟ ಚೇತನ್ ವಿರುದ್ಧ ರಾಜ್ಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.</p><p>ಶೇಷಾದ್ರಿಪುರದಲ್ಲಿರುವ ಅವರ ಮನೆಗೆ ಹೋರಾಟಗಾರ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು ಶನಿವಾರ ಸಂಜೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಹಲವರು ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಭಿಮಾನಿಗಳ ಆಕ್ರೋಶ ಹೆಚ್ಚಾದ ಬಳಿಕ ಚೇತನ್ ಕ್ಷಮೆಯಾಚಿಸಿದ್ದಾರೆ. ಬಳಿಕ ಅಭಿಮಾನಿಗಳು ಅಲ್ಲಿಂದ ತೆರಳಿದರು. ಚೇತನ್ ಮನೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.</p>.<p>‘ಎಕ್ಸ್’ ಖಾತೆಯಲ್ಲಿ ಶುಕ್ರವಾರ ಚೇತನ್ ಪೋಸ್ಟ್ ಹಾಕಿದ್ದರು. ಅದನ್ನು ಗಮನಿಸಿದ್ದ ‘ಡಾ.ರಾಜ್ಕುಮಾರ್ ಸೇನೆ’ಯ ಪದಾಧಿಕಾರಿಗಳು ಹಾಗೂ ರಾಜ್ ಅಭಿಮಾನಿಗಳು, ಶನಿವಾರ ಮಧ್ಯಾಹ್ನ ಬಸವೇಶ್ವರನಗರ ಠಾಣೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.</p><p>ಅಭಿಮಾನಿಗಳಿಗೆ ಚೇತನ್ ಅವಮಾನ ಮಾಡಿದ್ದಾರೆ. ನೋವಾಗಿದ್ದು, ಚೇತನ್ ವಿರುದ್ಧ ಕ್ರಮ ತೆಗೆದುಕೊಳ್ಳವಂತೆ ಸೇನೆಯ ಪದಾಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. </p><p>‘ದೂರು ಸ್ವೀಕರಿಸಲಾಗಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ. </p>.ಡಾ.ರಾಜ್ ಸಮಾಧಿಗೆ 2.5 ಎಕರೆ ನೀಡಿಕೆ ಎಷ್ಟು ಸರಿ? ನಟ ಚೇತನ್ ವಿವಾದಾಸ್ಪದ ಹೇಳಿಕೆ.ಡಾ.ರಾಜ್ ಸಮಾಧಿಗೆ ಕುಟುಂಬ ಸದಸ್ಯರಿಂದ ನಮನ.<p><strong>ಪೋಸ್ಟ್ನಲ್ಲಿ ಏನಿತ್ತು?:</strong> ‘ನಾವು ರಾಜ್ಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರದ ಮಧ್ಯದಲ್ಲಿ, 2006ರಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು’ ಎಂಬುದಾಗಿ ಚೇತನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. </p><p>‘ರಾಜ್ಕುಮಾರ್ ಅವರು ಬದುಕಿದ್ದಾಗ ಈ ಭೂಮಿಯ ವಿಚಾರವು ತಿಳಿದಿದ್ದರೇ ಅವರೇ ಬೇಡ ಎನ್ನುತ್ತಿದ್ದರು. ಅವರದ್ದು ವಿಶಾಲ ಮನಸ್ಸು. ನಾನು ಅಭಿಮಾನಿಗಳ ಸಂಘದವರನ್ನು ಪ್ರಶ್ನಿಸುತ್ತಿಲ್ಲ. ಸರ್ಕಾರವನ್ನು ಪ್ರಶ್ನಿಸುತ್ತಿದ್ದೇನೆ’ ಎಂದು ಚೇತನ್ ಮಾಧ್ಯಮದವರಿಗೆ ತಿಳಿಸಿದರು. </p>.<p>‘ಭೂಮಿಯ ದುರ್ಬಳಕೆಯಾದಾಗ ಪ್ರಶ್ನೆ ಮಾಡಿದ್ದೇನೆ. ಫಾಕ್ಸ್ಕಾನ್ಗೆ ಭೂಮಿ ನೀಡಿದಾಗಲೂ ಪ್ರಶ್ನಿಸಿದ್ದೇನೆ. ಅದು ಪ್ರಚಾರಕ್ಕೆ ಬರುವುದಿಲ್ಲ. ಅದೇ ರಾಜ್ಕುಮಾರ್ ವಿಚಾರದ ಬಗ್ಗೆ ಪೋಸ್ಟ್ ಮಾಡಿದಾಗ ಟಿಆರ್ಪಿಗೋಸ್ಕರ ಮಾಧ್ಯಮದವರು ಪ್ರಶ್ನಿಸುತ್ತಿದ್ದಾರೆ’ ಎಂದು ಆಪಾದಿಸಿದರು. </p><p>‘ಬಳ್ಳಾರಿ ಹಾಗೂ ಹೊಳಲ್ಕೆರೆ ಭಾಗದಲ್ಲಿ ಗಣಿಗಾರಿಕೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.</p><p>‘ನಾನೂ ಸಹ ಅಣ್ಣಾವ್ರ ಅಭಿಮಾನಿ. ಅವರ ಹೆಸರಿನಲ್ಲಿ ಸರ್ಕಾರ ಮಾಡಿದ್ದೆಲ್ಲವೂ ಸರಿಯೆಂದು ನೋಡಲು ಸಾಧ್ಯವಿಲ್ಲ. ಸರ್ಕಾರ ತಿಳಿವಳಿಕೆ ಹಾಗೂ ಮುಂದಾಲೋಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. </p>.<div><blockquote>ರಾಜ್ಕುಮಾರ್ ಅವರ ಹುಟ್ಟೂರು ಗಾಜನೂರಿಗೂ ಭೇಟಿ ನೀಡಿದ್ದೇನೆ. ಅಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಅದೇ ನಗರದ ಕೇಂದ್ರ ಭಾಗದಲ್ಲಿ ಜಾಗ ನೀಡಿರುವುದು ಜನಸಾಮಾನ್ಯರಿಗೆ ತೊಂದರೆ ಆಗಲಿದೆ..</blockquote><span class="attribution">– ಚೇತನ್, ನಟ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಡಾ.ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ರಾಜ್ಯ ಸರ್ಕಾರವು ಜಾಗ ನೀಡಿದ್ದಕ್ಕೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ನಟ ಚೇತನ್ ವಿರುದ್ಧ ರಾಜ್ಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.</p><p>ಶೇಷಾದ್ರಿಪುರದಲ್ಲಿರುವ ಅವರ ಮನೆಗೆ ಹೋರಾಟಗಾರ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು ಶನಿವಾರ ಸಂಜೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಹಲವರು ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಭಿಮಾನಿಗಳ ಆಕ್ರೋಶ ಹೆಚ್ಚಾದ ಬಳಿಕ ಚೇತನ್ ಕ್ಷಮೆಯಾಚಿಸಿದ್ದಾರೆ. ಬಳಿಕ ಅಭಿಮಾನಿಗಳು ಅಲ್ಲಿಂದ ತೆರಳಿದರು. ಚೇತನ್ ಮನೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.</p>.<p>‘ಎಕ್ಸ್’ ಖಾತೆಯಲ್ಲಿ ಶುಕ್ರವಾರ ಚೇತನ್ ಪೋಸ್ಟ್ ಹಾಕಿದ್ದರು. ಅದನ್ನು ಗಮನಿಸಿದ್ದ ‘ಡಾ.ರಾಜ್ಕುಮಾರ್ ಸೇನೆ’ಯ ಪದಾಧಿಕಾರಿಗಳು ಹಾಗೂ ರಾಜ್ ಅಭಿಮಾನಿಗಳು, ಶನಿವಾರ ಮಧ್ಯಾಹ್ನ ಬಸವೇಶ್ವರನಗರ ಠಾಣೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.</p><p>ಅಭಿಮಾನಿಗಳಿಗೆ ಚೇತನ್ ಅವಮಾನ ಮಾಡಿದ್ದಾರೆ. ನೋವಾಗಿದ್ದು, ಚೇತನ್ ವಿರುದ್ಧ ಕ್ರಮ ತೆಗೆದುಕೊಳ್ಳವಂತೆ ಸೇನೆಯ ಪದಾಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. </p><p>‘ದೂರು ಸ್ವೀಕರಿಸಲಾಗಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ. </p>.ಡಾ.ರಾಜ್ ಸಮಾಧಿಗೆ 2.5 ಎಕರೆ ನೀಡಿಕೆ ಎಷ್ಟು ಸರಿ? ನಟ ಚೇತನ್ ವಿವಾದಾಸ್ಪದ ಹೇಳಿಕೆ.ಡಾ.ರಾಜ್ ಸಮಾಧಿಗೆ ಕುಟುಂಬ ಸದಸ್ಯರಿಂದ ನಮನ.<p><strong>ಪೋಸ್ಟ್ನಲ್ಲಿ ಏನಿತ್ತು?:</strong> ‘ನಾವು ರಾಜ್ಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರದ ಮಧ್ಯದಲ್ಲಿ, 2006ರಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು’ ಎಂಬುದಾಗಿ ಚೇತನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. </p><p>‘ರಾಜ್ಕುಮಾರ್ ಅವರು ಬದುಕಿದ್ದಾಗ ಈ ಭೂಮಿಯ ವಿಚಾರವು ತಿಳಿದಿದ್ದರೇ ಅವರೇ ಬೇಡ ಎನ್ನುತ್ತಿದ್ದರು. ಅವರದ್ದು ವಿಶಾಲ ಮನಸ್ಸು. ನಾನು ಅಭಿಮಾನಿಗಳ ಸಂಘದವರನ್ನು ಪ್ರಶ್ನಿಸುತ್ತಿಲ್ಲ. ಸರ್ಕಾರವನ್ನು ಪ್ರಶ್ನಿಸುತ್ತಿದ್ದೇನೆ’ ಎಂದು ಚೇತನ್ ಮಾಧ್ಯಮದವರಿಗೆ ತಿಳಿಸಿದರು. </p>.<p>‘ಭೂಮಿಯ ದುರ್ಬಳಕೆಯಾದಾಗ ಪ್ರಶ್ನೆ ಮಾಡಿದ್ದೇನೆ. ಫಾಕ್ಸ್ಕಾನ್ಗೆ ಭೂಮಿ ನೀಡಿದಾಗಲೂ ಪ್ರಶ್ನಿಸಿದ್ದೇನೆ. ಅದು ಪ್ರಚಾರಕ್ಕೆ ಬರುವುದಿಲ್ಲ. ಅದೇ ರಾಜ್ಕುಮಾರ್ ವಿಚಾರದ ಬಗ್ಗೆ ಪೋಸ್ಟ್ ಮಾಡಿದಾಗ ಟಿಆರ್ಪಿಗೋಸ್ಕರ ಮಾಧ್ಯಮದವರು ಪ್ರಶ್ನಿಸುತ್ತಿದ್ದಾರೆ’ ಎಂದು ಆಪಾದಿಸಿದರು. </p><p>‘ಬಳ್ಳಾರಿ ಹಾಗೂ ಹೊಳಲ್ಕೆರೆ ಭಾಗದಲ್ಲಿ ಗಣಿಗಾರಿಕೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.</p><p>‘ನಾನೂ ಸಹ ಅಣ್ಣಾವ್ರ ಅಭಿಮಾನಿ. ಅವರ ಹೆಸರಿನಲ್ಲಿ ಸರ್ಕಾರ ಮಾಡಿದ್ದೆಲ್ಲವೂ ಸರಿಯೆಂದು ನೋಡಲು ಸಾಧ್ಯವಿಲ್ಲ. ಸರ್ಕಾರ ತಿಳಿವಳಿಕೆ ಹಾಗೂ ಮುಂದಾಲೋಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. </p>.<div><blockquote>ರಾಜ್ಕುಮಾರ್ ಅವರ ಹುಟ್ಟೂರು ಗಾಜನೂರಿಗೂ ಭೇಟಿ ನೀಡಿದ್ದೇನೆ. ಅಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಅದೇ ನಗರದ ಕೇಂದ್ರ ಭಾಗದಲ್ಲಿ ಜಾಗ ನೀಡಿರುವುದು ಜನಸಾಮಾನ್ಯರಿಗೆ ತೊಂದರೆ ಆಗಲಿದೆ..</blockquote><span class="attribution">– ಚೇತನ್, ನಟ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>