ಆದರ್ಶ ಸಮೂಹ ಸಂಸ್ಥೆಗಳ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಭಾರತವು ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಪರಿಶ್ರಮ ಇಲ್ಲದೇ ಯಾವುದೇ ಸಾಧನೆ ಇರುವುದಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ರೀತಿಯ ಯೋಜನೆಗಳಲ್ಲಿ ಬೆಂಗಳೂರು ನಗರವು ದೇಶದಲ್ಲೇ ಮುಂದಿದೆ. ಇದರ ಸದುಪಯೋಗವನ್ನು ಯುವ ಸಮೂಹ ಪಡೆದುಕೊಳ್ಳಬೇಕು’ ಎಂದರು.