‘ಫೆ.25ರಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಮುಂಭಾಗ ಇರುವ ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಮೆರವಣಿಗೆ ನಡೆಸಲಿದ್ದೇವೆ. ಅಲ್ಲಿಂದ ಹೊರಟು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಇದಕ್ಕಾಗಿ ‘ಭ್ರಷ್ಟಾಚಾರದ ವಿರುದ್ಧ ನಾವು’ ಎಂಬ ವೇದಿಕೆ ರೂಪಿಸಿದ್ದು, ವಕೀಲರ ಸಂಘಟನೆಗಳು, ಕೆಆರ್ಎಸ್ ಪಕ್ಷ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಲಿವೆ’ ಎಂದರು.