ಬೆಂಗಳೂರು ನಗರ ಜಿಲ್ಲೆಯ ಗೌರವ ವನ್ಯಜೀವಿ ವಾರ್ಡನ್ ಪ್ರಸನ್ನ ಕುಮಾರ್, ‘ಹೆಬ್ಬಾಳ ಕೆರೆ, ಮಡಿವಾಳ ಕೆರೆ, ಮೈಲಸಂದ್ರ ಕೆರೆಗಳ ಬಳಿ ನಾನು ಈ ಹಿಂದೆಯೂ ಬಣ್ಣದ ಕೊಕ್ಕರೆಗಳನ್ನು ನೋಡಿದ್ದೇನೆ. ಆದರೆ, ಲಾಕ್ಡೌನ್ ಬಳಿಕ ನಗರದ ಬಾನಿನಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿರುವುದು ನಿಜ. ಸ್ವಚ್ಛವಾಗಿರುವ ಆಗಸದಲ್ಲಿ ಬಾನಾಡಿಗಳು ಸ್ವಚ್ಛಂದವಾಗಿ ಹಾರಾಡುತ್ತಿವೆ. ಸದ್ದಿನ ಮಾಲಿನ್ಯ ಇಲ್ಲದಿರುವುದರಿಂದ ನಿರಾತಂಕವಾಗಿ ಹಾರಾಡಲು ಅವುಗಳಿಗೆ ಅವಕಾಶ ಸಿಕ್ಕಿದೆ’ ಎಂದರು.