ರಾಗಿ ಜೊತೆಯಲ್ಲಿ ತರಕಾರಿ ಬೆಳೆಗಳಾದ ಮೂಲಂಗಿ, ಅಲಸಂದೆ,ಟೊಮೆಟೊ, ಮೆಣಸಿನಕಾಯಿ, ಬೆಂಡೆಕಾಯಿಯನ್ನು ಹೊಲದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಹೆಸರಘಟ್ಟದ ರೈತ ಮಹೇಶ್, ‘ಈ ಸಾರಿ ಮುಂಗಾರು ಮಳೆ ನಿಧಾನವಾಗಿ ಪ್ರಾರಂಭವಾಯಿತು. ಇಷ್ಟರೊಳಗೆ ರಾಗಿ ಬಿತ್ತನೆ ಮಾಡಬೇಕಿತ್ತು. ಮಳೆ ಅಭಾವದಿಂದ ಅಲ್ಪ ಅವಧಿ ರಾಗಿ ಬೀಜ ಬಿತ್ತನೆ ಮಾಡಿದೆವು’ ಎಂದರು.