ಕಾರವಾರ: ಚುನಾವಣೆಗಳ ಸಂದರ್ಭದಲ್ಲಿ ಮಾಧ್ಯಮಗಳ ತಟಸ್ಥ ನಿಲುವು ಅಗತ್ಯ. ಎಲ್ಲ ಪಕ್ಷಗಳು, ಮುಖಂಡರ ವಿರುದ್ಧ ರಚನಾತ್ಮಕ ಟೀಕೆ
ಗಳಾದಾಗ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕೇಬಲ್ ಟಿವಿ ಆಪರೇಟರ್ಗಳು, ಪತ್ರಿಕೆಗಳ ಪ್ರಮುಖರು, ಪ್ರಕಾಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ನೀಡುವ ಮೊದಲು ಮಾಧ್ಯಮ ಪ್ರಮಾಣಪತ್ರ ಹಾಗೂ ಪರಿವೀಕ್ಷಣಾ ಸಮಿತಿಯಿಂದ ಕಡ್ಡಾಯವಾಗಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಜಾಹೀರಾತಿನ ಸ್ವರೂಪ, ಅಳತೆ, ಅದರ ಖರ್ಚನ್ನು ಸಮಿತಿಯು ಪರಿಶೀಲಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚವೆಂದು ಪರಿಗಣಿಸಲಿದೆ ಎಂದು ಹೇಳಿದರು.