‘ಅರ್ಚಕ ಮನು ಮೊದಲ ಬಾರಿಗೆ ಕರಗ ಹೊರುವ ಜವಾಬ್ದಾರಿ ವಹಿಸಿದ್ದರು. ಅವರು ದೈಹಿಕವಾಗಿ ಬಲಿಷ್ಠವಾಗಿದ್ದಾರೆ. ಆದರೆ, ಬೆಳಗಿನ ಕಾರ್ಯಕ್ರಮಗಳಿಂದಾಗಿ ಆಯಾಸಗೊಂಡಿದ್ದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೆ, ಸಾವಿರಾರು ಜನರ ನಡುವೆ ಕರಗ ಹೊರಲು ಗಾಬರಿಗೊಂಡಿದ್ದರು. ಹೀಗಾಗಿ, ಅವರ ಬದಲಿಗೆ ಪರ್ಯಾಯ ಅರ್ಚಕರಾದ ಜ್ಞಾನೇಂದ್ರ ಅವರಿಗೆ ಕರಗ ಹೊರುವ ಜವಾಬ್ದಾರಿ ನೀಡಲಾಯಿತು. ಇದರಲ್ಲಿ ಯಾವುದೇ ತಪ್ಪಿಲ್ಲ. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದಲೇ ಪ್ರಧಾನ ಅರ್ಚಕ ಹಾಗೂ ಪರ್ಯಾಯ ಅರ್ಚಕರನ್ನು ನೇಮಿಸಿಕೊಳ್ಳಲಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ತಿಗಳ ಸಮುದಾಯದ ಮುಖಂಡ ಪಿ.ಆರ್.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.