ಈ ವೇಳೆ ಬಸವರಾಜ್ ಮಾತನಾಡಿ, ‘ಕೆ.ಆರ್.ಪುರದ ಟ್ಯಾಂಕ್ ರಸ್ತೆಯಲ್ಲಿ ಭವನದ ಕಾಮಗಾರಿ 2014ರಲ್ಲಿ ಪೂರ್ಣಗೊಂಡಿದೆ. ಆದರೆ ಮೂಲಸೌಕರ್ಯದ ಕೊರತೆ ಕಾರಣಕ್ಕೆ ಭವನವನ್ನು ಉದ್ಘಾಟಿಸಿರಲಿಲ್ಲ. ಈಗ ಸಮಾಜ ಕಲ್ಯಾಣ ಇಲಾಖೆ ₹25 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಸಮುದಾಯ ಭವನಕ್ಕೆ ಮೂಲಸೌಕರ್ಯ ಒದಗಿಸಲಾಗುವುದು. ತಿಂಗಳ ಒಳಗಾಗಿ ಭವನವನ್ನು ಉದ್ಘಾಟಿಸಲಾಗುವುದು’ ಎಂದು ಹೇಳಿದರು.