ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಆಯುರ್ವೇದ ಪದ್ಧತಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಪ್ರತಿಯೊಬ್ಬರೂ ಇಂದು ಆಯುರ್ವೇದ ಉತ್ಪನ್ನವನ್ನು ಬಳಸಲಾರಂಭಿಸಿದ್ದಾರೆ. ‘ಅಮೃತ್ನೋನಿ’ ಉತ್ಪನ್ನಗಳು ಲಕ್ಷಾಂತರ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿ ಯಾಗಿದೆ. ನೂತನ ಉತ್ಪನ್ನವು ಜನರ ನೋವನ್ನು ನಿವಾರಿಸಿ, ದೇಹಕ್ಕೆ ಆರಾಮವನ್ನು ನೀಡಲಿ’ ಎಂದು ಶುಭ ಹಾರೈಸಿದರು.