’ಈಗಿನ ವ್ಯವಸ್ಥೆಯಲ್ಲಿ ಸರ್ಕಾರಿ ಅನುದಾನಿತ ಗುಲಾಮರಂತೆ ಕೆಲಸ ಮಾಡಬೇಕಿದೆ. ಆರೋಗ್ಯ ಸುರಕ್ಷೆ, ಕುಡಿಯುವ ನೀರು, ಹೆರಿಗೆ ರಜಾ, ಶೌಚಾಲಯಗಳನ್ನು ಬಳಸುವ ಅವಕಾಶವನ್ನು ಪೌರಕಾರ್ಮಿಕರಿಗೆ ನೀಡಬೇಕೆಂದು ಪದೇ ಪದೇ ಒತ್ತಾಯಿಸಿದರೂ ನಮ್ಮನ್ನು ಗುತ್ತಿಗೆದಾರರು, ಅಧಿಕಾರಿಗಳು ನಿರ್ಲಕ್ಷಿಸುತ್ತಾ ಬಂದಿದ್ದಾರೆ‘ ಎಂದು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಸಂಸ್ಥೆಯ ಸದಸ್ಯರು ಹೇಳಿದರು.