‘ಶ್ರೀಕಾಂತ ಯಾನೆ ಚಡ್ಡಿ (30), ಗೌತಮ್ ಯಾನೆ ಲಂಬೂ (25), ಅಚ್ಚಯ್ಯ ಯಾನೆ ಬೋಂಡಾ (34), ಜಯನೇಶಾ ಯಾನೆ ಉದಯ (22), ಎಸ್.ಹೇಮಂತ(22), ಕೆ.ಪ್ರತಾಪ್ (27), ನವೀನ್ (21) ಹಾಗೂ ಗಿರೀಶ ಯಾನೆ ಬಾಗಲ್ (22) ಬಂಧಿತರು. ಇವರು ಇದೇ 20ರ ರಾತ್ರಿ ಠಾಣೆ ವ್ಯಾಪ್ತಿಯ ಕಚೇರಿಗೆ ನುಗ್ಗಿ ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಬೀರುವಿನಲ್ಲಿದ್ದ ಹಣ ಕದ್ದಿದ್ದಲ್ಲದೇ ಮೊಬೈಲ್ಗಳನ್ನೂ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.