‘ನಾವು ನಿಮ್ಮ ರಾಜಕೀಯವನ್ನು ಅರ್ಥಮಾಡಿಕೊಳ್ಳಬಲ್ಲೆವು, ನಮ್ಮನ್ನು ವಿಭಜಿಸಲು ನಿಮ್ಮಿಂದ ಸಾಧ್ಯವಿಲ್ಲ, ಏಕೆಂದರೆ ನಾವು ಭಾರತೀಯರು’ ಎಂದು ಭಿತ್ತಿಪತ್ರಗಳನ್ನು ತೋರಿಸಿ ಮೌನ ಪ್ರತಿಭಟನೆ ನಡೆಸಿದರು. ‘ಅನ್ಯಾಯವೇ ಕಾನೂನು ಆದಾಗ, ದಂಗೆ ಕರ್ತವ್ಯವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಬ್ರಿಟಿಷರಂತೆ ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.