ನಂತರ ಪೊಲೀಸರು ಪುರಸಭೆ ನೀರು ಸರಬರಾಜು ವಿಭಾಗದ ವ್ಯವಸ್ಥಾಪಕ ಶಂಕ್ರಪ್ಪ ಅವರನ್ನು ಕರೆಯಿಸಿದರು. ಈ ಸಂದರ್ಭದಲ್ಲಿ ಶಂಕ್ರಪ್ಪ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಆಗ ಶಂಕ್ರಪ್ಪ ಮೇಲಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಲಭ್ಯ ಇರುವ ನೀರು ಕೆಸರಿನಿಂದ ಕೂಡಿದ್ದು, ಕೆಲ ಗಂಟೆ ಸಮಯ ಕೊಟ್ಟರೆ ನೀರನ್ನು ಶುದ್ಧೀಕರಿಸಿ ಬಿಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಈ ಭರವಸೆಯ ನಂತರ ಪ್ರತಿಭಟ ಸ್ಥಗಿತಗೊಳಿಸಲಾಯಿತು.