‘ವಾಹನ ಕಳ್ಳತನ ಪ್ರಕರಣದಲ್ಲಿ ಗಂಗಮ್ಮನಗುಡಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿಗಳು, ಕೆಲ ತಿಂಗಳು ಜೈಲಿನಲ್ಲಿದ್ದರು. ಜಾಮೀನು ಮೇಲೆ ಹೊರಬಂದು ಕೃತ್ಯ ಮುಂದುವರಿಸಿದ್ದರು. ಕೃತ್ಯದಿಂದ ಬಂದ ಹಣವನ್ನು ಆರೋಪಿಗಳು ದುಶ್ಟಟಗಳಿಗೆ ಖರ್ಚು ಮಾಡುತ್ತಿದ್ದರು. ಹಣ ಸಾಲದಿದ್ದರಿಂದ, ಇತ್ತೀಚೆಗೆ ಸುಲಿಗೆಗೆ ಇಳಿದಿದ್ದರು’ ಎಂದು ಪೊಲೀಸರು ತಿಳಿಸಿದರು.